
ಮಧುಗಿರಿ: ಜಯಮಂಗಲಿ ನದಿಯ ತಟದಲ್ಲಿ ಚದುರಿದ ಮನೆಗಳು ಕಟ್ಟಿಕೊಂಡು ಒಕ್ಕಲುತನವನ್ನು ನಂಬಿರುವ ರೈತ ಕುಟುಂಬಗಳು ಮುತ್ಯಾಮ್ಮ ದೇವಿಗೆ ಆರತಿ ಸೇವೆ ನೆರವೇರಿಸಿದರು.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಜಯಮಂಗಲಿ ನದಿ ಅಂಚಿನಲ್ಲಿರುವ ಕುಟುಂಬಗಳು ಹಾಗೂ ಅವರು ಸಾಕಿರುವ ದನ-ಕರುಗಳು ಮತ್ತು ಕುರಿ-ಮೇಕೆಗಳಿಗೆ ರೋಗ ರುಜಿನ ಕಾಡದಂತೆ, ಆರೋಗ್ಯವಾಗಿ ಇರಲಿ ಎಂಬ ನಂಬಿಕೆಯಿAದ ಹೋಬಳಿಯಲ್ಲಿ ಪ್ರಸಿದ್ದ ದೇವತೆಯಾದ ಮುತ್ಯಾಲಮ್ಮ ಗ್ರಾಮ ದೇವತೆಯನ್ನು ಕರೆತಂದು, ಹಸಿರು ಚಪ್ಪರ ಜತೆಗೆ ಶಾಮಿಯಾನ ಹಾಕಿಸಿ, ಆರತಿ ಮಾಡಿ ದೇವಿಗೆ ನೈವೇದ್ಯ ಅರ್ಪಿಸಿದರು.
ಈ ಭಾಗದ ರೈತರು 3 ಅಥವ 5 ವರ್ಷಕ್ಕೊಮ್ಮೆ ಮುತ್ಯಾಲಮ್ಮದೇವಿಯನ್ನು ಕರೆ ತಂದು ದೇವಿಗೆ ಆರತಿ ಪೂಜೆ ಕೈಂಕರ್ಯಗಳನ್ನು ಮಾಡುವುದರಿಂದ ನಾವು ಸಾಕುವ ಪ್ರಾಣಿಗಳು ಅರೋಗ್ಯವಾಗಿರುತ್ತವೆ. ಮತ್ತು ಈ ಭಾಗದಲ್ಲಿ ಉತ್ತಮವಾಗಿ ಮಳೆಯಾಗಿ, ಬೆಳೆ ಬೆಳೆಯಾಗುತ್ತದೆ ಎಂಬುದು ಈ ಭಾಗದ ರೈತರ ನಂಬಿಕೆಯಾಗಿದೆ.
ಕುರಿಗಾಹಿಗಳು ತಮ್ಮ ಕುರಿಗಳ ಮಂದೆಯನ್ನು ಅಪ್ಪಿಕೊಂಡು ಬಂದು, ಪ್ರತಿ ವರ್ಷದಂತೆ ದೇವಿಗೆ ಪ್ರದಕ್ಷಿಣೆ ಹಾಕಿಸಿ, ತಾವೂ ದೇವಿಯ ದರ್ಶನವನ್ನು ಪಡೆದರು. ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು, ಗ್ರಾಮಸ್ಥರು ದೇವಿಯ ದರ್ಶನ ಪಡೆದರು.

More Stories
ಗ್ರಾಮದ ರಕ್ಷಣೆಗೆ ಕರವುಗಲ್ಲು ಪುನರ್ ಪ್ರತಿಷ್ಠಾಪನೆ
ಕೊಡಿಗೇನಹಳ್ಳಿಯ ನೂತನ ಪೊಲೀಸ್ ಕಟ್ಟಡ ಉದ್ಘಾಟನೆ
ಕುರಿ ಸಂತೆಗೆ 5 ಏಕರೆ ಜಾಗ ಮಂಜೂರು