web stats

Madhugirinews

#1NewsofMadhugiri

ಕ್ರಿಕೆಟ್ ಎಂಬುದು ಯುವ ಸಮೂಹಕ್ಕೆ ಸ್ಪೂರ್ತಿದಾಯಕ

ಮಧುಗಿರಿ: ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಮೊದಲ ಬಾರಿಗೆ ದಸರಾ ಕ್ರೀಡಾಕೂಟವನವನ್ನು ಹಮ್ಮಿಕೊಂಡಿದ್ದು ತುಂಬಾ ಯಶಸ್ವಿಯಾಗಿ ನಡೆದಿದೆ ಎಂದು ಬಿಜೆಪಿ ಜಿಲ್ಲಾ ಓಬಿಸಿ ಉಪಾಧ್ಯಕ್ಷ ಹಾಗೂ ಭಾರತ ಆಹಾರ ನಿಗಮದ ಸದಸ್ಯ ಮಿಡಿಗೇಶಿ ಕೃಷ್ಣಮೂರ್ತಿ ತಿಳಿಸಿದರು.

ತಾಲೂಕಿನ ಮಿಡಿಗೇಶಿ ಗ್ರಾಮದ ಸರಕಾರಿ ಕಾಲೇಜು ಮೈದಾನದಲ್ಲಿ ಭಜರಂಗಿ ಕ್ರಿಕೆಟರ್ಸ್ ಆಯೋಜಿಸಿದ್ದ ಸಿಂಧೂರ ಕಪ್ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರಿಕೆಟ್ ಎಂಬುದು ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕವಾದ ಒಂದು ಕ್ರೀಡೆಯಾಗಿದೆ. ಹಬ್ಬ ಹರಿದಿನಗಳ ವೇಳೆ ಯುವಕರು ದುಶ್ಚಟಗಳಿಗೆ ದಾಸರಾಗದೆ ಕ್ರೀಡೆಗಳಲ್ಲಿ ಭಾಗವಹಿಸಿದಾಗ ಆರೋಗ್ಯವು ಉತ್ತಮವಾಗಿರುತ್ತದೆ ಜತೆಗೆ ಹಣದ ಉಳಿತಾಯ ಮತ್ತು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದರು. ಯುವಕರು ತುಂಬಾ ಉತ್ಸಾಹದಿಂದ ಕ್ರೀಡಾಕೂಟವನ್ನು ಆಯೋಜಿಸಿದ್ದು ಸ್ಪಂದನೆ ವ್ಯಕ್ತವಾಗಿದೆ ಇದೇ ರೀತಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವು ಇದೇ ಜಾಗದಲ್ಲಿ ಮಾಡಲಾಗುವುದು ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷ್ಣಮೂರ್ತಿ ಕ್ರೀಡಾಪಟುಗಳನ್ನು ಉತ್ತೇಜಿಸಿದ್ದು ವಿಜತರಿಗೆ ಮಿಡಿಗೇಶಿ ಬೆಟ್ಟದ ಚಿತ್ರವಿರುವ ಪಾರಿತೋಷಕ ನೀಡಿ ಸನ್ಮಾನಿಸಿರುವುದು ಅಭಿನಂದನಿಯ ಎಂದರು.

ಸುಮಾರು 28 ವಿವಿಧ ತಂಡಗಳು ಭಾಗವಹಿಸಿದ್ದು ಅಂತಿಮವಾಗಿ ಮಿಡಿಗೇಶಿ ಭಜರಂಗಿ ಕ್ರಿಕೆಟ್ ತಂಡ ಪ್ರಥಮ ಬಹುಮಾನವಾಗಿ 20 ಸಾವಿರ ನಗದು ಹಾಗೂ ಪಾರಿತೋಷಕ ಪಡೆದರೆ ಚಿನ್ನೇನಹಳ್ಳಿ ತಂಡ 10 ಸಾವಿರ ನಗದು ಹಾಗೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು, ಈ ಸಂದರ್ಭದಲ್ಲಿ ಆಯೋಜಕ ಮುಖ್ಯಸ್ಥ ಚಂದುರಾಜ್, ರಮೇಶ್, ಶಾಂತರಾಮ್, ರಾಜೇಶ್, ಹನುಮಂತರಾಜು , ಬಡಗಿ ರವಿ ಕುಮಾರ್, ಅಮೀರ್‌ಭಾಯಿ ರಾಜು ಹಾಜರಿದ್ದರು.

You may have missed