web stats

Madhugirinews

#1NewsofMadhugiri

ಎರಡು ಗುಂಪುಗಳ ನಡುವೆ ಮಾರಮಾರಿ; 4 ಜನ ಅರೆಸ್ಟ್

ಮಧುಗಿರಿ: ಹಳೆ ದ್ವೇಷಕ್ಕೆ ಗುಂಪು ಕಟ್ಟಿಕೊಂಡು ಮಾರಣಾಂತಿಕ ಹಲ್ಲೇ ಮಾಡಿದ ಆರೋಪಿಗಳನ್ನು ಮಧುಗಿರಿ ಪೊಲೀಸರು ಹೆಡೆಮುರಿ ಕಟ್ಟಿದ್ದು ಘಟನೆ ನಡೆದ 24 ಗಂಟೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಧುಗಿರಿ ತಾಲೂಕಿನ ಸಿದ್ದಾಪುರ ಕಾಲೋನಿ ಹುಡುಗರು ಹಾಗೂ ಬೆಂಕಿಪುರದ ಹುಡುಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ನಡುವೆ ಪರಸ್ಪರ ಹಲ್ಲೆ ನಡೆದಿದೆ. ಮಾರಣಾಂತಿಕ ಹಲ್ಲೆ ನಡೆಸುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಸಿದ್ದಾಪುರದ ಫೋಟೋ ಗ್ರಾಫರ್ ಮಂಜುನಾಥ್ ಹಾಗೂ ಬೆಂಕಿಪುರದ ಮಾರುತಿ ಎಂಬುವವರ ನಡುವೆ ಕಳೆದ ಎರಡು ತಿಂಗಳ ಹಿಂದೆ ಜಗಳ ನಡೆದಿದ್ದು ಹಳೆ ದ್ವೇಶದ ಹಿನ್ನೆಲೆಯಲ್ಲಿ ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಪುರದ ಮಾರುತಿ. ಆದಿ, ಶಿವಾ, ಪುನಿತ್, ಸೀನು, ಮಂಜು, ಮೇಸ್ತಿç ಸೂರಿ ಒಟ್ಟು 7 ಜನರ ಗುಂಪು ಕಟ್ಟಿಕೊಂಡು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಗಾಯಾಳು ಮಂಜುನಾಥ್ ದೂರು ನೀಡಿದ್ದಾರೆ. ಮಧುಗಿರಿ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು 24 ಗಂಟೆಯಲ್ಲಿ ನಾಲ್ಕು ಆರೋಪಿಗಳನ್ನು ಬಂದಿಸಿದ್ದು ಉಳಿದ 3 ಅರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

 

https://www.facebook.com/share/v/1AMSDgSKxP/

 

You may have missed